ಕರ್ಣಾಟಬಲ
ಬಹುಶಃ ನಿಮ್ಮಲ್ಲಿ ಹಲವಾರು ಜನ ಈ ಹೆಸರನ್ನು ಮೊದಲನೇ ಬಾರಿ ಕೇಳುತ್ತಿದ್ದೀರಿ. ಇತಿಹಾಸದ ಮೇಲೆ ಆಸಕ್ತಿಯಿದ್ದವರು ಅದರಲ್ಲೂ ವೀರ ಕನ್ನಡಿಗ ಮನೆತನಗಳಾದ ಚಾಲುಕ್ಯ, ರಾಷ್ಟ್ರಕೂಟರ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದವರಿಗೆ ಈ ಪದಗಳೇನೂ ಹೊಸದಾಗಿ ತೋರುವುದಿಲ್ಲ.
"ಕರ್ಣಾಟಬಲ" ಸಂಘವು ಕನ್ನಡ ನುಡಿಯ, ಕನ್ನಡ ನಾಡಿನ ಹಾಗೂ ಕನ್ನಡಿಗರ ಹೆಮ್ಮೆಯನ್ನು ಜಗತ್ತಿಗೆ ಸಾರುವ ಹೊತ್ತಿನಲ್ಲಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆಗೆ ಸಮರ್ಪಿತವಾಗಿದೆ. ನಾವು ಸಮಾಜದಲ್ಲಿ ಶ್ರೇಷ್ಠ ಸೇವೆಯನ್ನು ನೀಡಲು, ಉತ್ತಮವಾದ ಅನುಭವವನ್ನು ಹಂಚಿಕೊಳ್ಳಲು ಮತ್ತು ನಮ್ಮ ಉದ್ದೇಶಗಳನ್ನು ಸಾಧಿಸಲು ಬದ್ಧರಾಗಿದ್ದೇವೆ. ನಮ್ಮ ಸಂಘವು ಕನ್ನಡಿಗರ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಬಹುಶಃ ನಿಮ್ಮಲ್ಲಿ ಹಲವಾರು ಜನ ಈ ಹೆಸರನ್ನು ಮೊದಲನೇ ಬಾರಿ ಕೇಳುತ್ತಿದ್ದೀರಿ. ಇತಿಹಾಸದ ಮೇಲೆ ಆಸಕ್ತಿಯಿದ್ದವರು ಅದರಲ್ಲೂ ವೀರ ಕನ್ನಡಿಗ ಮನೆತನಗಳಾದ ಚಾಲುಕ್ಯ, ರಾಷ್ಟ್ರಕೂಟರ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದವರಿಗೆ ಈ ಪದಗಳೇನೂ ಹೊಸದಾಗಿ ತೋರುವುದಿಲ್ಲ.
ಕನ್ನಡಿಗರ ಇತಿಹಾಸ, ಘನ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸಂಶೋಧನೆ ಮಾಡುತ್ತಾ ಸಾಗಿದವರಿಗೆ ಮೈ ನವಿರೇಳಿಸುವುದು ಇದೇ ‘ಕರ್ಣಾಟಬಲ’ ಎನ್ನುವ ಪದ. ಅಂದಹಾಗೆ ‘ಕರ್ಣಾಟಬಲ‘ ಎಂಬುದು ಚಾಲುಕ್ಯರು ತಮ್ಮ ಸೇನೆಗೆ ಇಟ್ಟಿದ್ದ ಹೆಸರು. ಇದೇ ಕರ್ಣಾಟಬಲ ಸೇನೆಯ ಮುಖಾಂತರ ಚಾಲುಕ್ಯರು ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ವಿಂದ್ಯ ಪರ್ವತಗಳನ್ನು ದಾಟಿ ಆಗಿನ ರಾಜಕೀಯ ಕೇಂದ್ರ ಮಧ್ಯಪ್ರದೇಶದ ಕನೌಜ್ ಗೂ ತಮ್ಮ ಆಡಳಿತ ವಿಸ್ತರಿಸಿದ್ದರು. ಕರ್ಣಾಟ ಬಲ ಸೇನೆಯು ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ, ಭರತ ಖಂಡದ ಇತಿಹಾಸದಲ್ಲೇ ಪ್ರಾಮುಖ್ಯತೆ ಪಡೆದ ಅಧ್ಯಾಯ. ಕಾರಣ, ಉತ್ತರ ಭಾರತದ ಹೆಚ್ಚಿನ ಎಲ್ಲ ಭೂಪ್ರದೇಶಗಳನ್ನೂ ಕೈವಶ ಮಾಡಿಕೊಂಡು ದಕ್ಷಿಣದ ಕಡೆಗೆ ತನ್ನ ಸೇನೆಯೊಂದಿಗೆ ಮುನ್ನುಗ್ಗುತ್ತಿದ್ದ ಹರ್ಷವರ್ಧನನನ್ನು ಸೋಲಿಸಿದ್ದು ಇದೇ ಚಾಲುಕ್ಯರ ಕರ್ಣಾಟಬಲ ಸೇನೆ. ತದನಂತರ ಚಾಲುಕ್ಯರು ಇಡೀ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿಕೊಂಡು ಕನ್ನಡಿಗರ ಕೆಚ್ಚು, ಕನ್ನಡಿಗರ ಶೌರ್ಯವನ್ನು ಇಡೀ ಭರತ ಭೂಮಿಗೆ ಪರಿಚಯಿಸಿದರು ಹಾಗು ಚಾಲುಕ್ಯರ ಇಮ್ಮಡಿ ಪುಲಿಕೇಶಿಯು ‘ದಕ್ಷಿಣಾಪಥೇಶ್ವರ’ ಎಂದು ಬಿರುದಾಂಕಿತನಾದನು.
ಕರ್ಣಾಟಬಲದ ವಿಜಯಯಾತ್ರೆ ಅಲ್ಲಿಗೆ ನಿಲ್ಲದೆ ಮುಂದುವರೆದು ಭಾರತ ಉಪಖಂಡದ ಮೇಲೆ ಆದ ಮೊದಲ ಅರಬ್ಬೀಯರ ಅತಿಕ್ರಮಣವನ್ನು ಇಮ್ಮಡಿ ಪುಲಿಕೇಶಿಯ ನಾಯಕತ್ವದಲ್ಲಿ ಇಂದಿನ ಮಹಾರಾಷ್ಟ್ರದ ಥಾಣೆ ಬಳಿಯಲ್ಲಿ ತಡೆಯಲಾಯಿತು. ದೂರದ ಶ್ರೀಲಂಕಾ, ಪರ್ಶಿಯಾ(ಇಂದಿನ ಇರಾನ್)ಗೂ ಸೈನ್ಯದ ನೆರವಿನ ಹಸ್ತ ಚಾಚಿ ಅಲ್ಲಿನವರೆಗೂ ಕನ್ನಡದ ಪ್ರಭಾವವನ್ನು ವಿಸ್ತರಿಸಿದರು. ೮ನೇ ಶತಮಾನದಲ್ಲಿ ಇಂದಿನ ಗುಜರಾತಿನಲ್ಲಿ ಆದ ಎರಡನೇ ಅರಬ್ ಅತಿಕ್ರಮಣವನ್ನು ಚಾಲುಕ್ಯರ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಹಿಮ್ಮೆಟ್ಟಿಸಲಾಯಿತು. ಹೀಗೆ ಭಾರತ ಉಪಖಂಡದಲ್ಲಿ ಸನಾತನ ಧರ್ಮ ಉಳಿಸಿದ ಕೀರ್ತಿಯಲ್ಲಿ ಚಾಲುಕ್ಯರು ಮೇಲುಗೈ ಸಾಧಿಸಿದರು. ಭಾರತದ ಉಪಖಂಡದಲ್ಲಿ ಕರ್ಣಾಟಬಲದಷ್ಟು ಪ್ರಬಲವಾಗಿದ್ದ ಸೈನ್ಯ ಮತ್ತೊಂದು ಕಾಣಸಿಗುವುದು ಅಪರೂಪ. ಅದೂ ಈ ಸೈನ್ಯ ಕನ್ನಡಿಗರಿಂದ ಕಟ್ಟಿದ್ದು ಹಾಗೂ ಬಹುತೇಕ ಕನ್ನಡಿಗರನ್ನೇ ಒಳಗೊಂಡಿತ್ತು ಎನ್ನುವುದು ಇಂದಿನ ಕನ್ನಡಿಗರು ಹೆದೆಯುಬ್ಬಿಸಿ ಹೆಮ್ಮೆ ಪಡಬೇಕಾದ ವಿಚಾರ.
ಬಾದಾಮಿ ಚಾಲುಕ್ಯರ ನಂತರ ಕನ್ನಡಿಗರ ಒಗ್ಗಟ್ಟು ಹಾಗು ಸಾಮ್ರಾಜ್ಯಗಳನ್ನು ಕಟ್ಟುವ ಪ್ರಕ್ರಿಯೆ ಮುಂದುವರೆಯುತ್ತಾ ಸಾಗಿತು. ಕನ್ನಡಿಗರ ಪ್ರಬಲ ಸೇನೆಗಳು ಭಾರತ ಉಪಖಂಡದಾದ್ಯಂತ ಚಟುವಟಿಕೆಯಿಂದ ಕೂಡಿದ್ದವು ಹಾಗು ನೆರೆಯ ನೇಪಾಳ, ಬಾಂಗ್ಲಾದೇಶಕ್ಕೂ ಕನ್ನಡಿಗರ ಪ್ರಭಾವ ಹಬ್ಬಿಸಿ ಭಾರತ ಉಪಖಂಡದ ಹೆಚ್ಚಿನ ಎಲ್ಲ ಭಾಗಗಳನ್ನೂ ಕನ್ನಡಿಗ ಅರಸು ಮನೆತನಗಳ ಆಡಳಿತೆಯ ಛತ್ರಿಯಡಿಗೆ ತಂದು ನಿಲ್ಲಿಸಿದರು. ಗುಜರಾತ್ ಅನ್ನು ಆಳಿದ ‘ಸೋಲಂಕಿಗಳು’, ಮಧ್ಯಪ್ರದೇಶವನ್ನು ಆಳಿದ ‘ಪಾರಮಾರರು’, ಒಡಿಶಾವನ್ನು ಆಳಿದ ‘ಪೂರ್ವದ ಗಂಗರು’, ಬಿಹಾರವನ್ನು ಆಳಿದ ‘ಕರ್ಣಾಟರು’, ಛತ್ತೀಸ್ ಘಡವನ್ನು ಆಳಿದ ‘ಚಿಂದಕ ನಾಗರು’, ಆಂಧ್ರವನ್ನು ಆಳಿದ ‘ವೆಂಗಿ ಚಾಲುಕ್ಯರು’ , ತೆಲಂಗಾಣವನ್ನು ಆಳಿದ ‘ವೇಮುಲವಾಡದ ಚಾಲುಕ್ಯರು’, ಗೋವೆಯನ್ನು ಆಳಿದ ‘ಕದಂಬರು’, ಬಂಗಾಳ ಹಾಗು ಬಾಂಗ್ಲಾದೇಶವನ್ನು ಆಳಿದ ‘ಕರ್ಣಾಟ ಸೇನರು’ ಹಾಗು ನೇಪಾಳವನ್ನು ಆಳಿದ ‘ಕರ್ಣಾಟರು’ ಎಲ್ಲರೂ ತಮ್ಮನ್ನು ತಾವು ಹೆಮ್ಮೆಯಿಂದ ಕನ್ನಡಿಗರು ಎಂದೇ ಹೇಳಿಕೊಂಡರು.